ದಲಿತ ಚಳವಳಿಯ ಸಂಭ್ರಮಾಚರಣೆ-ಅಂಬೇಡ್ಕರ್ ಸ್ವಾಭಿಮಾನಿ ಸೇನೆ  

ದಲಿತ ಚಳವಳಿಯ ಸಂಭ್ರಮಾಚರಣೆ-ಅಂಬೇಡ್ಕರ್ ಸ್ವಾಭಿಮಾನಿ ಸೇನೆ  

ದಲಿತ ಚಳವಳಿಯ ಸಂಭ್ರಮಾಚರಣೆ-ಅಂಬೇಡ್ಕರ್ ಸ್ವಾಭಿಮಾನಿ ಸೇನೆ  

ದಿ.ಪ್ರೊ.ಬಿ.ಕೃಷ್ಣಪ್ಪನವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು | ನೊಂದಾಯಿಸಿ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಇದೇ ಫೆ.29ರಂದು ಗುರುವಾರ ಬೆಳಗ್ಗೆ 11ಕ್ಕೆ ಯಾದಗಿರಿ ನಗರದ ವಾಲ್ಮೀಕಿ ಭವನದಲ್ಲಿ ದಲಿತ  ಚಳುವಳಿಯ 50 ವರ್ಷಗಳ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಏರ್ಪಡಿಸಲಾಗಿದೆ ಎಂದು ರಾಜ್ಯಾಧ್ಯಕ್ಷರಾದ ಡಾ.ಕೋದಂಡ ರಾಮ್ ಪತ್ರಿಕೆಗೆ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ದಲಿತ ಚಳುವಳಿಯ 50 ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕ‌ರ್ ಸ್ವಾಭಿಮಾನಿ ಸೇನೆ ರಾಜ್ಯಾಧ್ಯಕ್ಷರಾದ ಡಾ.ಕೋದಂಡರಾಮ್ ರವರು ವಹಿಸಿರುವ ಈ ಕಾರ್ಯಕ್ರಮವನ್ನು ಪ್ರಥಮ ದರ್ಜೆ ಗುತ್ತಿಗೆದಾರರಾದ ಹನುಮೇಗೌಡ ಬೀರನಕಲ್ ಸಮಾರಂಭವನ್ನು ಉದ್ಘಾಟಿಸುವರು, ಪರಮಪೂಜ್ಯ ಶ್ರೀ ಶಾಂತವೀರ ಮುರುಘರಾಜೇಂದ್ರ ಮಹಾ ಸ್ವಾಮಿ ಅವರು ದಿವ್ಯಸಾನಿಧ್ಯ ವಹಿಸುವರು,ಮತ್ತು ಸಂಘಟನೆಯ ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು. 
ಸಂಘಟನೆ ಸದಸ್ಯರಿಂದ ನೇತ್ರದಾನ: ನಮ್ಮ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ದಲಿತ ಚಳುವಳಿಯ 50ವರ್ಷದ ಸಂಭ್ರಮಾಚರಣೆ ಅಂಗವಾಗಿ ನೇತ್ರದಾನ ಮಾಡಲು ನೋಂದಾಯಿಸಲು ಮುಂದಾಗಿದ್ದಾರೆ. ದಲಿತ ಚಳುವಳಿಯ ಹಿರಿಯ ಮುಖಂಡರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.